Wednesday, January 13, 2010

ಪ.ಗೋ.ಪತ್ರಗಳು - ೨ :ಹಾಲ್-ಹೋಲು; ಬ್ಯಾಂಕ್-ಬೇಂಕ್ ಗಳ ನಡುವೆ ತಾಕಲಾಟ!


ಹಾಲ್-ಹೋಲು; ಬ್ಯಾಂಕ್-ಬೇಂಕ್ ಗಳ ನಡುವೆ ತಾಕಲಾಟ!

ಬಹುಶಃ ಪ.ಗೋ. ಬೆಂಗಳೂರಿನಲ್ಲಿ ಒಂದಷ್ಟು ಕಾಲ ಸೇವೆ ಸಲ್ಲಿಸಿ 01.08.1959ರಂದು ಮಂಗಳೂರಿನ ‘ನವಭಾರತ’ ಪತ್ರಿಕೆಗೆ ಸೇರ್ಪಡೆಯಾಗಿರಬಹುದು. ಆ ಸಮಯಕ್ಕೆ ಹೆಚ್.ಆರ್.ನಾಗೇಶರಾವ್ ಬೆಂಗಳೂರಿನ ‘ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಸೇರಿ ಒಂದು ವರ್ಷ ಕಳೆದಿತ್ತು. ಬೆಂಗಳೂರಿನಲ್ಲಿದ್ದಾಗ ಪ.ಗೋ. ಅವರಿಗೆ ‘ನ್ಯೂಸ್’ ಸೆಕ್ಷನ್ ಬದಲಿಗೆ ‘ಮ್ಯಾಗಝಿನ್’ ಸೆಕ್ಷನ್ ಲಭಿಸಿದ್ದಿರಬಹುದು. ಆ ಕಾರಣಕ್ಕಾಗಿಯೇ ಅವರು ಬೆಂಗಳೂರಿಗೆ ವಿದಾಯ ಹೇಳಿರಬಹುದು. ಇದು ನನ್ನ ಊಹೆ. ಮುಂದಿನ ಅದೆಷ್ಟೋ ಪತ್ರಗಳಲ್ಲಿ ಬೆಂಗಳೂರಿನ ಪತ್ರಿಕೆಗಳಲ್ಲಿ ಅವಕಾಶಗಳಿವೆಯೆ? ಎಂಬ ಪ್ರಶ್ನೆಯನ್ನು ಪ.ಗೋ. ಕೇಳಿದ್ದಾರೆ.

ದಿನಾಂಕ 08.08.1959 ಪ.ಗೋ. ತಮ್ಮ ಮಿತ್ರ ನಾಗೇಶರಾಯರಿಗೆ ಹೀಗೊಂದು ಪತ್ರ ಬರೆಯುತ್ತಾರೆ. ಅದು ದಿನಾಂಕ 10.08.1959ರಂದು ತಲುಪಿತೆಂದು ನಾಗೇಶರಾವ್ ಪತ್ರದ ಮೇಲೇ ದಾಖಲಿಸಿದ್ದಾರೆ. ಪ.ಗೋ. ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲಿ ಪೋಸ್ಟ್ ಕಾರ್ಡ್ ಅನ್ನು ತುಂಬಿಸಿದ್ದಾರೆ.

ನಮಸ್ತೆ ನಾಗೇಶರಾಯರಿಗೆ!

ಒಂದನೇ ತಾರೀಕಿನಿಂದ ನೊಗಕ್ಕೆ ಕತ್ತು ತಗಲಿದೆ. ಸಾಪ್ತಾಹಿಕ ಮಂಜರಿಯ ವ್ಯವಸ್ಥೆ.ಇಲ್ಲೂ ಸಿಗಲಿಲ್ಲ ನ್ಯೂಸೂ!

ಇರಲಿ ‘ಕಾಲಕ್ಕೆ ತಕ್ಕಂತೆ ತಾಳ’ ತಾನೆ? 16ರಿಂದ ಸಂಚಿಕೆ ಆರಂಭ.

ನೀವು ಹೇಗಿದ್ದೀರೆಂದು ತಿಳಿಯುವ ಕುತೂಹಲ. ಪತ್ರ ವ್ಯವಹಾರವಿರಿಸಿಕೊಳ್ಳಲೂ ಬಹುದಲ್ಲವೆ!
ಬೆಂಗಳೂರಿನ ಗಾಳಿ ತಿಂದು ಅಭ್ಯಾಸ .... ಮಂಗಳೂರಿನ ಸೆಕೆಯುಣ್ಣಲು ಆಗಿಲ್ಲ. ವೃತ್ತಿ ಸಹಜ ಹೋಟಲೂಟ (‘ಅವರು’ ಊರು ಮನೆಯಲ್ಲಿ!)

ಬರಹವಿನ್ನೂ ನಾಟಿಲ್ಲ. ಹಾಲ್ - ಹೋಲು; ಬ್ಯಾಂಕ್ - ಬೇಂಕುಗಳ ನಡುವೆ ತಾಕಲಾಟ ಇನ್ನೂ ಆಗುತ್ತಿದೆ. (ಕೈವಾಡ ಏನಾದರೂ ಗುರುತಿಸಿದ್ದೀರಾ?). ಕೆಲವೊಮ್ಮೆ ವಾರ್ತಾವಿಭಾಗಕ್ಕೂ ಹೋಗುತ್ತಿದ್ದೇನೆ - ಅನಧಿಕೃತವಾಗಿ.

ಶ್ರೀ ಅ.ಸುಬ್ಬರಾಯರಿಗೆ ಒಂದು ನೆನಕೆ ಸಲ್ಲಿಸಿ (ಕಾಫಿ timeನಲ್ಲಾದರೆ ಉತ್ತಮ)

ಉತ್ತರ ಹಾರೈಸಲೆ?

ನಿಮ್ಮ

ಪ.ಗೋ. ೮ /೮ /೫೯

ಹಾಲ್ದೊಡ್ಡೇರಿ ಸುಧೀಂದ್ರ





* * * * * * **

ಪ್ರಿಯ ಓದುಗರೇ,


ಈ ಅಭಿಪ್ರಾಯಗಳನ್ನು ಓದುವಾಗ ನಿಮಗೆ ಇದೇನು ಲೇಖನಗಳೋ ಅಥವಾ ಅಭಿಪ್ರಾಯಗಳೋ ಎಂಬ ಸಂದೇಹ ಬಂದರೂ ತಪ್ಪಲ್ಲ. ಕಾರಣ `ಪ.ಗೋ' ಅವರ ಪ್ರಭಾವ...ಅವರ ಆದರ್ಶಗಳು. ಪ.ಗೋ ಓರ್ವ ಆದರ್ಶ ಪತ್ರಕರ್ತರಷ್ಟೇ ಆಗಿರಲಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಲ್ಪಟ್ಟ ಅನೇಕ ಅಭಿಪ್ರಾಯಕಾರರು ಉಲ್ಲೇಖಿಸಿದ್ದಾರೆ. ಓದುಗರಿಗೆ ಅನೇಕ ಹೊಸ ವಿಚಾರಗಳನ್ನು ಪ.ಗೋ ಅವರ ಕುರಿತಾಗಿ ಕಟ್ಟಿಕೊಟ್ಟಿದ್ದಾರೆ. ಅಭಿಪ್ರಾಯಿಸಿದ ಎಲ್ಲಾ ಆತ್ಮೀಯರಿಗೂ ಕೃತಜ್ಞತೆಗಳು. ಅಭಿಪ್ರಾಯಗಳನ್ನು ಕ್ರೋಢೀಕರಿಸಿದ ಪ.ರಾಮಚಂದ್ರ ಅವರಿಗೂ ಕೃತಜ್ಞತೆಗಳು. ಇನ್ನಷ್ಟು ಅಭಿಪ್ರಾಯಗಳು ನಮ್ಮ ಇನ್ ಬಾಕ್ಸ್ ನಲ್ಲಿವೆ. ಅನೇಕ ಪತ್ರಕಗಳು ಹೆಸರು ಉಲ್ಲೇಖಿಸದೇ ಬಂದಿವೆ ಅವುಗಳಲ್ಲಿ ಆಯ್ದ ಕೆಲವನ್ನು ಪ್ರಕಟಿಸಿದ್ದೇವೆ. ಮುಂದೆಯೂ ತಮ್ಮೆಲ್ಲರ ಪ್ರೋತ್ಸಾಹ ನಿರೀಕ್ಷಿಸುತ್ತಿದ್ದೇವೆ. - ಸಂ.



ಆತ್ಮೀಯ ಹರೀಶ್,


ನನ್ನ ತಂದೆಯವರನ್ನು ಕನ್ನಡಿಗರಿಗೆ ಅದರಲ್ಲೂ ವಿಶೇಷವಾಗಿ ಕರಾವಳಿ ಓದುಗರಿಗೆ ಮತ್ತೆ ಪರಿಚಯಿಸುತ್ತಿದ್ದೀರಿ. ರಾಮಚಂದ್ರ ಹಾಗೂ ನಿಮ್ಮ ಅಭಿಮಾನಕ್ಕೆ ನಾನು ಋಣಿ.


ವಂದನೆಗಳೊಡನೆ


ಹಾಲ್ದೊಡ್ಡೇರಿ ಸುಧೀಂದ್ರ

* * * * *

ನಿಜವಾಗಿಯೂ ..ಈಗ ನಮ್ಮ ಪ್ರಪಂಚ ಚಿಕ್ಕದಾಗಿದೆ ಅಂತ ಅನ್ನಿಸುತ್ತದೆ. ಮೊದಲಿನವರು ಪ್ರಯಾಣಕ್ಕೆ ಪಟ್ಟ ಪಾಡು...ನಂತವರಿಗೆ ಗೊತ್ತಿಲ್ಲ. ಅದನ್ನೆಲ್ಲ ಅನುಭವಿಸಿದವರು ಹೇಳಲು ಅವರೇ ಇಲ್ಲ.ಪ.ಗೋ. ಅವರಂತವರು ಬರೆದ ಕತೆಗಳು ಮಾತ್ರ ಇಂತಹ ಅನುಭವಗಳನ್ನು ಕಣ್ಣಿಗೆ ಕಟ್ಟಿದಂತೆ ಹೇಳ ಬಲ್ಲದು.


- ಮೌನೇಶ್ , ಪುತ್ತೂರು

* * * * * * *

ಪ.ಗೋ.ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳ" ಗೊಂಚಲಿನಿಂದ ಮೂಡಿಬರುತ್ತಿರುವ ಒಂದೊಂದು ಅಂಕಣಗಳೂ ಸಮಾಜದ ಹಲವು ಮುಖಗಳನ್ನು ತೆರೆದಿಡುವುದರ ಜೊತೆಗೆ ಓದುಗರಲ್ಲಿ ಮತ್ತೆ ಓದುವ ಆಸಕ್ತಿಯನ್ನು ಮೂಡಿಸುತ್ತದೆ.

- ಅಶ್ರಫ್ ಮಂಜ್ರಾಬಾದ್, ತಬೂಕ್-ಸೌದಿ ಅರೇಬಿಯಾ

* * * * * * *
ಗೋಪಾಲಕೃಷ್ಣ (ಪ.ಗೋ.) ಎಂದರೆ ಪದ್ಯಾಣ ಗೋಪಾಲಕೃಷ್ಣ ಎಂಬುದರ ಬಗ್ಗೆ ಪತ್ರಿಕೋದ್ಯಮದ ಗೋಪಾಲಕೃಷ್ಣ ಎಂಬುದು ಜನಜನಿತವಾದ ವಿಚಾರ ಎಂದು ಡಾ.ಬನಾರಿ ಹೇಳಿದ ಮಾತು ಸತ್ಯವಾದದ್ದು. ಇದರ ಜೊತೆಗೆ ಯಕ್ಷಗಾನ ಎಂಬ ವಿಶೇಷಣವನ್ನು ಕೂಡಾ ಗುರುತಿಸಬಹುದು.
ಅಡ್ಯನಡ್ಕದ ಈಚಣ್ಣಭಟ್ಟರು ಎಂದರೆ ಪದ್ಯಾಣ ಈಶ್ವರ ಭಟ್ಟರು ಯಕ್ಷಗಾನ ಪ್ರೇಮಿ ಹಾಗೂ ಪ್ರೋತ್ಸಾಹಕರಾಗಿದ್ದರು. ಪ್ರತಿವರ್ಷ ನಾಲ್ಕಾರು ಮೇಳಗಳ ಯಕ್ಷಗಾನ ಬಯಲಾಟಗಳನ್ನು ಅಡ್ಯನಡ್ಕ ಶಾಲೆಯ ಆಟದ ಬಯಲಿನಲ್ಲಿ ಏರ್ಪಡಿಸಿ ಸುತ್ತುಮುತ್ತಲಿನ ನಾಲ್ಕು ಗ್ರಾಮಗಳ ಸಾರ್ವಜನಿಕರಿಗೆ ಒದಗಿಸುತ್ತಿದ್ದರು. ಪ.ಗೋ. ಇವರ ಪುತ್ರ. ಹೀಗಾಗಿ ಯಕ್ಷಗಾನ ಇವರ ರಕ್ತನಾಳದಲ್ಲಿ ಹರಿದು ಬಂದಿದೆ ಎನ್ನಬಹುದು. ಪ.ಗೋ. ತಾಳಮದ್ದಳೆ ಕಾರ್ಯಕ್ರಮದಲ್ಲಿ ಕೂಡಾ ಒಮ್ಮೊಮ್ಮೆ ಅರ್ಥ ಹೇಳುತ್ತಿದ್ದರು. ವಿಶೇಷವೆಂದರೆ ಕುರುಡಪದವು ಶಾಲೆಯಲ್ಲಿ ಹಿರಿಯ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳ ಜೊತೆಗೆ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದರು.
ಪ.ಗೋ. ಅವರ ಇತರ ಅಭಿರುಚಿಯೆಂದರೆ ನಾಟಕ, ಸಿನೆಮಾ ಮೊದಲಾದ ಮಾಧ್ಯಮಗಳು. ತುಳು ಭಾಷೆಯಲ್ಲಿ ಮೂರನೆಯ ಸಿನೆಮಾವನ್ನು ಮಂಗಳೂರಿನಲ್ಲಿ ತಯಾರಿಸಿದ್ದರು.(ಆದರೆ ಇದು ಬಿಡುಗಡೆ ಆಗಲಿಲ್ಲ) ಒಂದು ಕೊಂಕಣಿ ಚಿತ್ರವನ್ನು ಕೂಡಾ ಪ. ಗೋ. ನಿರ್ದೇಶಿಸಿದ್ದರು. ಶಾಲಾದಿನಗಳಲ್ಲಿ ತಿಂಗಳ ಹಬ್ಬದ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಮುಂದೆ ದೇಶಭಕ್ತರು? ಎಂಬ ರಾಜಕೀಯ ನಾಟಕವನ್ನು ೧೯೪೮ರಲ್ಲಿ ಅಡ್ಯನಡ್ಕದಲ್ಲಿ ಪ.ಗೋ.ತಾವೇ ಬರೆದು ನಿರ್ದೇಶಿಸಿ ಮುಖ್ಯ ಪಾತ್ರವನ್ನು ಕೂಡಾ ವಹಿಸಿ ಪ್ರದರ್ಶಿಸಿದ್ದರು. ಅದುವರೆಗೆ ಪೌರಾಣಿಕ ಅಥವಾ ಐತಿಹಾಸಿಕ ನಾಟಕಗಳಿಗೆ ಸೀಮಿತವಾಗಿದ್ದ ಗ್ರಾಮೀಣ ನಾಟಕ ಮಂಡಳಿಗಳಿಗೆ ಈ ಹೊಸ ಗಾಳಿ ಹೊಸ ಚೇತನ ತುಂಬಿತು ಎನ್ನಬಹುದು.
ಪ.ಗೋ. ಮುಂಬಯಿಯಲ್ಲಿ ಸುಮಾರು ೮ ವರ್ಷಗಳ ಕಾಲ ಸಿನೆಮಾ ರಂಗದಲ್ಲಿ ದುಡಿದಿದ್ದರು. ಉಪನಿರ್ದೇಶಕರಾಗಿಯೂ ಇದ್ದರು. ಪ.ಗೋ. ಅವರ ಇನ್ನೊಂದು ಕ್ಷೇತ್ರ ಶಿಕ್ಷಣ ಕ್ಷೇತ್ರ. ಇವರು ಕೆಲಕಾಲ ಅಡ್ಯನಡ್ಕ ಶಾಲೆಯಲ್ಲಿ ಶಿಕ್ಷಕರಾಗಿಯೂ ಇದ್ದರು. ಬಣ್ಣದ ಕುಂಚದಿಂದ ಚಿತ್ರ ಬಿಡಿಸುತ್ತಿದ್ದರು ಹಾಗೂ ವ್ಯಂಗ್ಯ ಚಿತ್ರಗಳನ್ನು ಕೂಡಾ ವಿದ್ಯಾರ್ಥಿದೆಸೆ ಯಲ್ಲಿಯೇ ಬರೆದು ಪ್ರದರ್ಶಿಸುತ್ತಿದ್ದರು. ಇವರ ಒಂದು ಕಾರ್ಟೂನ್ ಚಿತ್ರ (ಕುಂಞಿ ತಮ್ಮ ಎಂಬ ಅಡ್ಡಹೆಸರಿನ ಸಹೋದರ ಸದಾಶಿವಭಟ್ಟರ ಬಗ್ಗೆ ಇದ್ದ ವ್ಯಂಗ್ಯ ಚಿತ್ರ) ತುಂಬಾ ಮೆಚ್ಚುಗೆ ಪಡೆಯಿತು. ಅದೇರೀತಿ ಅವರ ತಂದೆಯ ಕೋಪವನ್ನೂ ಮೀರಿಸಿತು. "ನನ್ನ ಮುಂದೆ ನಿಲ್ಲಬೇಡ ,ಹೊರಟುಹೋಗು" ಎಂದು ಘರ್ಜಿಸಿದರು. ಉಟ್ಟ ಬಟ್ಟೆ, ತೊಟ್ಟ ಬನಿಯನ್,ಕೈಯಲ್ಲೊಂದು ಪುಸ್ತಕ ಹಿಡಿದು ಪ.ಗೋ. ಮನೆಯಿಂದ ಹೊರಬಿದ್ದರು. ಆಗ ಅವರ ವಯಸ್ಸು ಸುಮಾರು ೧೨ ಇದ್ದಿರಬಹುದು. ಆತ್ಮಾಭಿಮಾನ ಪ.ಗೋ. ಅವರ ಇನ್ನೊಂದು ಸಂಪತ್ತು ಎನ್ನಬಹುದು. ಊರಿನ ಹಿರಿಯರಾದ ಗುರಿಕ್ಕಾರ ನಾರಾಯಣ ಭಟ್ಟರು, ಶಾಲೆಯ ತಿಮ್ಮಣ್ಣ ಮಾಸ್ಟರು,ಲಕ್ಷ್ಮಣ ಪೈ ಮೊದಲಾದ ಊರ ಪ್ರಮುಖರು ಪ.ಗೋ.ಅವರನ್ನು ಸಮಾಧಾನ ಪಡಿಸಿ ಮನೆಗೆ ಕರೆತರಬೇಕಾಯಿತು.
ಪ.ಗೋ. ಜೀವನದಲ್ಲಿ ಅನೇಕ ಸಾಹಸಗಳನ್ನು ಮಾಡಿದ್ದರೂ ಗೆಲುವು ತೀರ ಕಮ್ಮಿ. ಆದರೆ ಗೆಲುವು ಪಡೆದ ಮಹತ್ವದ ಅಂಶಗಳಲ್ಲಿ ೪ ಕಾದಂಬರಿಗಳನ್ನು ಬರೆದದ್ದು ಸುಮಾರು ೪೦೦೦ ಪುಟಗಳಷ್ಟು. ೧೩ ಪತ್ರಿಕೆಗಳಲ್ಲಿ ಬೇರೆಬೇರೆ ಕಾಲದಲ್ಲಿ "ಕಾಲಂ" ಬರೆಯುತ್ತಿದ್ದರು ಹಾಗೂ ನಾಲ್ಕು ದಶಕಗಳಷ್ಟು ಕಾಲ ಪತ್ರಿಕೋದ್ಯಮವನ್ನೇ ಬದುಕಿನ ಉಸಿರಾಗಿ ನಡೆಸಿ ಕೊಂಡದ್ದು ಅವರ ವೈಶಿಷ್ಟ್ಯ ಎನ್ನಬಹುದು. ಸ್ವತಃ ವಾರ್ತಾಲೋಕ ಎಂಬ ದಿನಪತ್ರಿಕೆ ಯನ್ನು ಸಂಪಾದಿಸಿ, ಮುದ್ರಿಸಿ, ಪ್ರಕಟಿಸಿದ ಪತ್ರಿಕೆಯನ್ನು ಅವರ ಪತ್ನಿ ಶ್ರೀಮತಿ ಸಾವಿತ್ರಿ ಗೋಪಾಲಕೃಷ್ಣ ಮನೆಮನೆಗೆ ತಾವೇ ಹಂಚುತ್ತಿದ್ದರು ಎಂಬುದು ಅತೀ ಸೋಜಿಗದ ವಿಷಯ. ಇಂತಹ ವಿಶಿಷ್ಟ ವ್ಯಕ್ತಿ ಪ.ಗೋ. ಆತ್ಮೀಯ ವರ್ಗದಲ್ಲಿ ನಾನು ಇದ್ದೆ ಎಂಬುದು ನನಗೆ ಹೆಮ್ಮೆ ಪಡುವ ವಿಚಾರ.
- ಡಾ. ಎಂ.ಬಿ.ಮರಕಿಣಿ
* * ** * ** *
ನಮ್ಮ ಪ್ರಾಯ ಮಾತ್ರ ಬದಲಾಗುತ್ತಿದೆ ಆದರೆ ಲೋಕ ಇದ್ದ ಹಾಗೆ ಇದೆ. Simply No Change at all. ಇದನ್ನು ಬಹಳ ವರ್ಷಗಳ ಹಿಂದೆಯೇ ಪ. ಗೋ.ರವರು ಮನಗಂಡಿದ್ದರು . ನಾವು ಈಗ ಅವರ ಕಥೆಗಳನ್ನು ಓದಿ ಅದು ನೂರಕ್ಕೆ ನೂರು ಸರಿ ಈಶ್ವರಿ. ಕೆ. ಭಟ್, ನೆಲ್ಲಿಕ್ಕುಂಜೆ ಗುತ್ತು, ಉಕ್ಕಿನಡ್ಕ, ಕಾಸರಗೋಡು.
* * * * * **
ಪದ್ಯಾಣ ಗೋಪಾಲಕೃಷ್ಣರ - ನನ್ನ ಸ್ನೇಹ ಮತ್ತು ಸಹಾಯ ಪರಸ್ಪರ ಅಷ್ಟು ಆತ್ಮೀಯವಾಗಿತ್ತು. ವೃತ್ತಿಯಲ್ಲಿಯೂ - ನನ್ನ ಸ್ವಂತ ಸಮಸ್ಯೆಗಳಲ್ಲಿಯೂ ಅವರು ನನ್ನೊಡನೆ ಸಹಕಾರ ಮತ್ತು ಸಹಾಯ ಆಗಿಂದ್ಯಾಗೆ ನೀಡುತ್ತಿದರು.ಹಾಗಾಗಿ ಡಾ. ಎಮ್.ಬಿ.ಮರಕಿಣಿ ನನ್ನನು ಸಂಪರ್ಕಿಸಿ ಪ.ಗೋ.ಸ್ಮಾರಕ ವಿಶ್ವಸ್ಥ ಮಂಡಲಿ ರಚಿಸಿ, ಅದರ ಅಧ್ಯಕ್ಷರಾಗಬೇಕೆಂದು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡೆ.
ಸದುದ್ದೇಶದಿಂದ ಸ್ಥಾಪಿತವಾದ ಈ ಟ್ರಸ್ಟಿನ ಮೂಲಕ ಹೊರ ತಂದ ಕೃತಿ, ಕನ್ನಡ ಪ್ರೇಮಿಗಳು ಓದಿ ಖುಶಿಪಡಬಹುದಾದ ಅಂಕಣ ಬರಹಗಳು “ನೋ ಚೇಂಜ್ ಕಥೆಗಳು”. ಈ ಸಂಕಲನಗಳು ಪ.ಗೋ. ಅವರ ಸಾಧನೆಯನ್ನು ಪರಿಚಯಿಸುವ ಜೊತೆಗೆ ಅವರ ಯಥಾರ್ಥತೆಯನ್ನು ಪ್ರತಿಬಿಂಬಿಸುವ ವಿಶ್ವಾಸ ವಿಶ್ವಸ್ಥ ಮಂಡಲಿಯದ್ದು.
ಟ್ರಸ್ಟಿನ ವತಿಯಿಂದ ಪ್ರಾರಂಭಿಸಿದ ಉದಯೋನ್ಮುಖ ಯುವ ಪತ್ರಕರ್ತರ ಉತ್ಕೃಷ್ಟ ಗ್ರಾಮೀಣ ವರದಿಗೆ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಹತ್ತು ವರ್ಷಗಳಿಂದ ನಡೆಸಿದ್ದೇವೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೆರವು ದೊರೆತಿದೆ. ಇವರಿಗೆ ನಾವು ಋಣಿಗಳು.
ಕಳೆದ ಎರಡು ವರ್ಷದಿಂದ ನನ್ನ ಇಳಿವಯಸ್ಸಿನ ಅನಾರೋಗ್ಯದಿಂದಾಗಿ ನಡೆಯದ ಈ ಪ್ರಶಸ್ತಿ ಕಾರ್ಯವನ್ನು ಮುನ್ನಡೆಸುವ ನನ್ನ ಕೋರಿಕೆಯನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರು ಒಪ್ಪಿಕೊಂಡಿದ್ದಾರೆ. ೨೦೦೪ರ ಉತ್ಕೃಷ್ಟ ಗ್ರಾಮೀಣ ವರದಿ “ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರದ ಕನಸು”,ಇದರ ಸಲುವಾಗಿ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ವಿಜೇತ ಅಂದಿನ ಉದಯೋನ್ಮುಖ ಪತ್ರಕರ್ತ ಶ್ರೀ ಗುರುವಪ್ಪ ಎನ್.ಟಿ.ಬಾಳೇಪುಣಿಯವರು ಇಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುವ ವ್ಯವಸ್ಥೆ ಮುನ್ನಡೆಸಿಕೊಂಡು ಹೋಗಬೇಕೆಂದು ಪತ್ರಕರ್ತರ ಸಂಘಕ್ಕೆ ನಾನು ವಿವರಿಸಿದ್ದೇನೆ.
ನಾನು ಈ ವಿಶ್ವಸ್ಥ ಮಂಡಳಿಗೆ ಸೇರಿದ ಬಗ್ಗೆ ನನ್ನ ಸ್ನೇಹಿತರೊಬ್ಬರು,“ಕ್ಷುಲ್ಲಕ ವಿಚಾರಗಳಿಗೆ ಕೋರ್ಟ್ ಮೆಟ್ಟಲು ಹತ್ತುವ ನಮ್ಮ ಬಳಗದಲ್ಲಿ ನೀವು ಹೇಗೆ ಸೇರಿಕೊಂಡಿರಿ” ಅಂತ ಕೇಳಿದರು.“ಪ.ಗೋ. - ನನ್ನ ಸ್ನೇಹ ಅಷ್ಟು ಆತ್ಮೀಯವಾಗಿತ್ತು” ಎಂದಷ್ಟೆ ಉತ್ತರಿಸಿದೆ.
-ಯು.ನರಸಿಂಹ ರಾವ್,
ನಿವೃತ್ತ ಪತ್ರಕರ್ತ, "ದಿ ಹಿಂದೂ" ಪತ್ರಿಕೆಯ ಮಂಗಳೂರಿನ ಪೂರ್ವ ವರದಿಗಾರ.
* * * * * * * *
ಹಿರಿಯ ಸಾಹಿತಿಯಾಗಿ ಬಹಳಷ್ಟು ಅನುಭವದೊಂದಿಗೆ ಸುತ್ತು ನಿತ್ಯವೂ ಕಾಣುವ ವಸ್ತುಗಳನ್ನು ಆಯ್ದು ಸಾಹಿತ್ಯ - ಅಭಿರುಚಿಯನ್ನು ಬಡಿದು -ಎಬ್ಬಿಸುವ , ಓದಿದರೆ ಮತ್ತೆ ಮತ್ತೆ ಓದಬೇಕೆನ್ನುವ ಸಾಹಿತ್ಯ ಚೈತನ್ಯವನ್ನು ತುಂಬಿಸುವ ವಿಶೇಷ ರಚನೆಯೇ ಅವರ ರಚನೆ ಆಕರ್ಷಕವಾಗುವೂದರಲ್ಲಿ ಸಂಶಯವಿಲ್ಲ : ವಿಶ್ವಪತಿ ಎಂ., ವಿವೇಕ ಸಾಹಿತ್ಯ ಮಾಲೆ, ಮಣ್ಣಗುಡ್ಡ ,ಮಂಗಳೂರು.
* * * * * * *
ಗಹನವಾದ ವಿಷಯಗಳನ್ನು ತುಂಬಾ ಸರಳವಾಗಿ ಹೇಳುವ ಲೇಖನಗಳು. ವಿಷಯಕ್ಕೆ ಪೂರಕವಾದ ಹಾಸ್ಯ, ತುಸು ಹೆಚ್ಚು-ಕಡಿಮೆ ಎನ್ನುವ ಹಾಗೆ ಇಲ್ಲ.ಯಾವುದನ್ನೂ ಅಗತ್ಯಕ್ಕಿಂತ ಹೆಚ್ಚು ಹೇಳದೇ, ಉಳಿದದ್ದನ್ನು ಓದುಗರ ವಿಚಾರಕ್ಕೆ ಬಿಡುವ ಶೈಲಿ ತುಂಬಾ ಚೆನ್ನಾಗಿದೆ. ತಾನು ಹೇಳಿದ್ದೆ ಸತ್ಯ, ಅದನ್ನೇ ನಂಬಬೇಕು ಎಂದು ಓದುಗರನ್ನು ಬಲವಂತ ಮಾಡುವ ಧಾಟಿ ಲೇಖನಗಳಲ್ಲಿ ಇಲ್ಲ. (ಇಂದಿನ ಕೆಲವು ಅಂಕಣಕಾರರು ನೋಡಿ ಕಲಿಯಬೇಕಾದ ವಿಚಾರಗಳು ಸಾಕಷ್ಟಿವೆ). ಭಾಷೆಯೂ ಬಹಳ ಸುಂದರವಾಗಿದೆ. ಮುಂದಿನ ವಾರಕ್ಕಾಗಿ ಕಾಯುವಂತೆ ಮಾಡುವ ಅಂಕಣಗಳು.
Balasubrahmanya, Doha
* * * * * **
ನಾನು ಮಂಗಳೂರಲ್ಲಿ ಇದ್ದಾಗ ಪ.ಗೋ ಅವರ ವಲಯದಲ್ಲಿ ಇದ್ದೆ. ಅವರ ನೇರ, ಸರಳ ಮತ್ತು ಸ್ಪಷ್ಟ ನಡೆ ನುಡಿ ಗಳಿಂದ ನಾನು ತುಂಬಾ ಕಲಿತಿದ್ದೆ. ಈಗ ಎಲ್ಲ ನೆನಪಾಗಿ ಎದೆ ಭಾರವಾಗುತ್ತಿದೆ.
- ಪುರುಷೋತ್ತಮ ಬಿಳಿಮಲೆ
* * * * * ** *
ಪ. ಗೋ ರವರ ಬಗ್ಗೆ ಹೆಚ್ಹಿನ ಮಾಹಿತಿ ಕೊಟ್ಟ ಈ ಕನಸು ಪತ್ರಿಕೋದ್ಯಮ ಕ್ಕೆ ಧನ್ಯವಾದಗಳು.ಇನ್ನು ಹೆಚ್ಹಿನ ಸಂಚಿಕೆಗಳು ಬರಲಿ ಎಂದು ಆಶೀಸುವ,
ಕಿನಿಲ ಸುರೇಶ ಭಟ್ಟ
* * * ** * * *
ಪದ್ಯಾಣ ಗೋಪಾಲ ಕೃಷ್ಣ ಭಟ್ಟರು ಒಬ್ಬ ಸೃಜನ ಶೀಲ ಪತ್ರಕರ್ತ ಎನ್ನುವುದರಲ್ಲಿ ಎರಡು ಮಾತಿಲ್ಲ.ಭಾಷೆ,ಸಾಹಿತ್ಯ ಹಾಗೂ ವಿಚಾರದಲ್ಲಿ ಯಾವುದೇ ಕೊರತೆ ಇಲ್ಲ.ಈಗಿನ ಹಲವಾರು ಪತ್ರಕರ್ತರು ಇಷ್ಟೆಲ್ಲಾ ತಾಂತ್ರಿಕತೆ ಇದ್ದೂ ಕೂಡ ಭಾಷೆ ,ಸಾಹಿತ್ಯ,ವ್ಯಾಕರಣದಲ್ಲಿ ತಪ್ಪನ್ನು ಮಾಡುತ್ತಾರೆ.ಅವರ ಪತ್ರಗಳು ಯಾವುದೋ ಲೋಕಕ್ಕೆ ಎಳೆದು ಕೊಂಡು ಹೋಗುತ್ತವೆ.ಅವರ ಒಂದು ಪತ್ರದಲ್ಲಿ ಹಲವಾರು ವಿಷಯಗಳು ಅಡಕ ವಾಗಿರುತ್ತವೆ.ಇಂತಹ ಪತ್ರ ಗಳನ್ನು ಪ್ರಕಟಿಸಿದ ಈ ಕನಸು ಪತ್ರಿಕಾ ಮಂಡಳಿಯ ಎಲ್ಲ ಕನಸು ನನಸಾಗಲೆಂದು ಹಾರೈಸುತ್ತೇನೆ.
- ಕುಮಾರ್ ಕುಂಟಿಕಾನ ಮಠ ,ಲಂಡನ್ .
* * * * * * *
ಶ್ರೀಯುತ ಹರೀಶ್ ,
ಈ ಕನಸು .ಕಾಂ ಪ್ರಸ್ತುತ ಪ್ರಕಟಿಸುತ್ತಿರುವ ಶ್ರೀಯುತ ನಾಗೇಶರಾಯರ ಅದ್ಭುತ ಸಂಗ್ರಹಗಳನ್ನು ನಮ್ಮಂತಹ ಓದುಗರಿಗೆ ದೊರಕುವಂತೆ ಮಾಡಿದ ನಿಮಗೆ ಹಾಗೂ ಸದರಿ ಸಂಗ್ರಹಗಳನ್ನು ಜತನದಿಂದ ಕಾಪಾಡಿದ ಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರ ಇವರಿಗೂ ಓದುಗರಾದ ನಾವೆಲ್ಲರೂ ಅಭಾರಿಗಳು. ಯಾಂತ್ರಿಕ ಜೀವನದ ಈ ದಿವಸಗಳಲ್ಲಿ ಪತ್ರಗಳು ಬಹಳಷ್ಟು ಅಪರೂಪ. ಹೀಗಿರುತ್ತಾ, ಶ್ರೀಯುತ ಪ. ಗೋ.ರವರ ೧೯೬೪ ಇಸವಿಯ ಪತ್ರವನ್ನು ನೋಡಿ ಸಂತೋಷವಾಯಿತು.ಅವರಿಬ್ಬರ ಆತ್ಮೀಯತೆ ೫ ಗೆರೆಗಳ ಪತ್ರದಲ್ಲಿ ಸ್ಪಷ್ಟವಾಗಿ ಭಾವಸವಾಗಿವೆ. ಶ್ರೀಯುತ ಪ. ಗೋ. ರವರ ಬರವಣಿಗೆಗಳ ಶೈಲಿಯೇ ಹಾಗೆ. ಹೇಳಬೇಕಾದುದನ್ನು ಚುಟುಕಾಗಿ,ಮನಮುಟ್ಟುವಂತೆ, ಬೇಕಾದರೆ ವ್ಯಂಗ್ಯವಾಗಿ! ಬರೆಯುವುದು ಅವರ ಶೈಲಿ. ಈ ಕನಸಿಗೆ ಶ್ರಮಿಸುತ್ತಿರುವ ನಿಮಗೆ ನಮ್ಮ ಧನ್ಯವಾದಗಳು.ಇನ್ನೂ ಹೆಚ್ಚಿನ ಓದುಗರು ಈ. ಕನಸಿಗೆ ದೊರಕಲಿ ಎಂದು ನನ್ನ ಹಾರೈಕೆ.
ನಮಸ್ಕಾರ.
ರಾಮಕೃಷ್ಣ ಪುಂಜತ್ತೋಡಿ.
ಕತಾರ್
* * * * * * *
ನಿಜಕ್ಕೂ ಧಾಖಲಾಗ ಬೇಕಾದ ಸ೦ಗತಿ.
ಈಗಲಾದರೂ ಆಗುತ್ತಿರುವುದು ಸ೦ತಸದ ವಿಚಾರ.
- Venkatakrishna.K.K.
* * * * * * **
ನಾನು, ರವಿಶಂಕರ್.ಕೆ.ಭಟ್, ಮೂಲತಃ ಕಾಸರಗೋಡಿನ ಕುಂಬಳೆಯವನು. ಸಕುಟುಂಬವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಸದ್ಯ ಸುವರ್ಣ ನ್ಯೂಸ್ ಸುದ್ದಿವಾಹಿನಿಯಲ್ಲಿ ಸುದ್ದಿ ಸಂಪಾದಕನ ಉದ್ಯೋಗ (ಕಳೆದ ನ.15ರ ವರೆಗೆ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕನಾಗಿದ್ದೆ). ಪತ್ನಿ ನಾಗಚಂದ್ರಿಕಾ ಹಿನ್ನೆಲೆ ಗಾಯಕಿ, ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾಳೆ (ಕಳೆದ ತಿಂಗಳು ದುಬೈನಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿದ್ದು ಇತ್ತೀಚಿನದು). ಪುತ್ರ ಅರ್ಣವ ಇನ್ನೂ ಒಂದೂವರೆ ವರ್ಷದ ಕಂದ. ತಂದೆ ಸುಬ್ರಹ್ಮಣ್ಯ ಭಟ್, ತಾಯಿ ಸರಸ್ವತಿ ಅವರೂ ಜತೆಯಲ್ಲೇ ಇದ್ದಾರೆ.
ಏತನ್ಮಧ್ಯೆ, ನನ್ನದೊಂದು ಸಣ್ಣ ಪ್ರಶ್ನೆ ನಿಮ್ಮಲ್ಲಿ. ನಾನು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪೂರ್ಣಪ್ರಜ್ಞ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ನನಗೆ ಶ್ರೀಪತಿ ಪದ್ಯಾಣ ಎಂಬ ಹೆಸರಿನ ಕನ್ನಡ ಗುರುಗಳಿದ್ದರು. ಅವರು ತಮಗೆ ಪರಿಚಿತರೇ? ಹೌದಾಗಿದ್ದರೆ ದಯವಿಟ್ಟು ಅವರ ವಿಳಾಸ ಇತ್ಯಾದಿ ಮಾಹಿತಿ ನೀಡಿದರೆ ಸಂಪರ್ಕಿಸುವ ಬಯಕೆ ಇದೆ.ಹೊಸ ವರುಷದ ಶುಭಾಶಯಗಳೊಂದಿಗೆ,
ರವಿಶಂಕರ್.ಕೆ.ಭಟ್
* * * * * *
DEAR SRI RAMACHANDRA,
Sri pa. go. has done pa lot for so many fields and people. But he was not lucky to be recognised,. Also due to his attitude and style of working. he was a an avadhoota type of worker, a real detatched person.
Another thing to note is, in the history of Yakshagana, many people claim many things as started by them . they dont know , men like. pa. go and others have done those things long back. so a systematic record of happenings is needed.
- M. prabhakara joshy.
* * * * * *
I am very much happy to read Mr.P.gopalakrishna's stories. Because, I knew him personally very well when he was alive. Still I remember his advice. I am the student of him. I salute him. And, through this media I express my deep gratitude towards his family. My wishes to Mrs.Savithri Gopalakrisha bhat.
- Flora Castelino, Dubai
* * * * * *
Dear Editor, I have been reading ‘No-change Kathegalu’ . I am very thankful to you for publishing this series. Its author, the Late P. Gopalakrishna, is a guru for a generation of young journalists. I had the good fortunes of working with him in Mangalore during the early 1990s. He was considered a walking encyclopedia. Mangalore was a small city then but was slowly acquiring importance in the national and the international map. Local journalists’ knowledge was limited and when important persons from Bangalore, Delhi or abroad came to address press conferences in Mangalore most of us would have nothing to ask them. Pa Go used to manage such press conferences by asking the most intelligent questions. I had seen several such dignitaries calling Pa. Go for a separate discussion later. We used to wonder where this man had acquired all these knowledge sitting in a place like Mangalore during those pre-Intenet days. There was hardly anything that he did not know. He was the Times of India Correspondent then. I was working for a different newspaper but he would read all my reports clinically and give me his valuable feedback. There were several occasions when he pulled me up for silly mistakes, which no one else could spot. One day we covered the Mangalore University Senate meeting together. I wrote that a decision taken by the Senate was sent to the State Legislature for ratification. I do not know how it occurred to me to write so. The next day Pa. Go was furious. He asked me what on earth made me think that a Senate decision would be sent to the State Legislature? He said I better read public administration and know how various institutions worked in a democratic polity or else quit journalism. I felt ashamed especially because he did it in front of my other colleagues. But that was a valuable lesson. I realized it as I went to work for major newspapers and journalism institutions. Pa. Go would also never forget to compliment me for a good report, which, I should say, was very rare. I always felt that Pa Go did not get his due and he wasted his talents in a small place like Mangalore. He could have become a national figure in journalism or whatever he chose to do.
Thanks again:- Narayana A Gatty*
* ** * * *
PA GO..very rare journalist. I am lucky to accompany him a couple of pres meets. I still remember style of asking(attacking) questions..
- Ramesh S Perlae t.v ,Mangalore .
* * * * * *
ಪ. ಗೋ. ಜೊತೆಗಿನ ಪತ್ರಿಕೋದ್ಯಮದ ದಿನಗಳು ಅವಿಸ್ಮರಣೀಯವಾದವು. ಅವರ ಕುರಿತು ಈ-ಕನಸು ಉತ್ತಮ ಕೆಲಸ ಮಾದುತ್ತಿರುವುದಕ್ಕೆ ಅಭಿನಂದನೆಗಳು.
ಚಿದಂಬರ ಬೈಕಂಪಾಡಿ
ವಿ ಫೋರ್ ಮೀಡಿಯಾ ,ಮಂಗಳೂರು.





No comments:

Visitors to this page