Thursday, August 13, 2009

'ಕನ್ನಡ ಪ್ರಭ' ಉಜಿರೆ ವರದಿಗಾರ ಹೃಷಿಕೇಶ ಧರ್ಮಸ್ಥಳ ಇವರಿಗೆ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನೀಡ ಲಾಗುವ ೨೦೦೮ರ ಪ.ಗೋ. (ಪದ್ಯಾಣ ಗೋಪಾಲಕೃಷ್ಣ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ `ಕನ್ನಡ ಪ್ರಭ' ದ.ಕ. ಜಿಲ್ಲೆಯ ಉಜಿರೆ ವರದಿಗಾರ ಹೃಷಿಕೇಶ ಧರ್ಮಸ್ಥಳ ಇವರಿಗೆ ಲಭಿಸಿದೆ. ೨೦೦೮ ಅಕ್ಟೋಬರ್ ೩ `ಕನ್ನಡ ಪ್ರಭ'ದಲ್ಲಿ ಪ್ರಕಟವಾದ `ಬಾರದ ಸವಲತ್ತಿಗೆ ಕಾದಿದೆ ಜನತೆ' ವರದಿಗೆ ಈ ಪ್ರಶಸ್ತಿ ಲಭಿಸಿದೆ.

೫ ಸಾವಿರ ರು. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿ ದೆ. ಪ್ರಶಸ್ತಿ ಪ್ರದಾನ ಶೀಘ್ರವೇ ಮಂಗಳೂರಿನಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್.ಟಿ ಬಾಳೆಪುಣಿ ತಿಳಿಸಿದ್ದಾರೆ.

Visitors to this page